ಬ್ಲಾಗಿಗರ ಕೂಟ: ರಿಪೋರ್ಟ್ ಕಾರ್ಡ್ಸ್
ಕನ್ನಡ ಜಾಲಿಗ ಕೂಟಕ್ಕೆ ಶ್ರೀ ಥಂಬ್ಸ್ ಅಪ್ ಕೊಡುತ್ತಿದ್ದಾರೆ.
ಮೊದಲನೇದಾಗಿ ಅಷ್ಟು ಜನ ಕನ್ನಡ ಬ್ಲಾಗರ್ಸ್ ಒಟ್ಟು ಸೇರಿದ್ದೇ ತುಂಬಾ ಖುಷಿ ಕೊಟ್ಟ ವಿಷ್ಯ. ಅದಕ್ಕೆ ಪ್ರಣತಿಗೆ ಮೊದಲ ಥ್ಯಾಂಕ್ಸ್! ಅಂತರ್ಜಾಲದಲ್ಲಿ ಕನ್ನಡ ಬೆಳೆಸೋ ಪ್ರಯತ್ನ ಮಾಡ್ತಿರೋ ಅನುಭವಿಗಳನ್ನ ಕರೆಸಿ ಮಾತಾಡ್ಸಿದ್ದು apt ಅನ್ನಿಸ್ತು. ಕಾರ್ಯಕ್ರಮದ ಮೊದಲಿನ ಭಾಗದಲ್ಲಿ ಸುಮಾರು ಪಾಲು ತಾಂತ್ರಿಕ ಸಮಸ್ಯೆ-ಸವಾಲುಗಳ ಚರ್ಚೆಗೇ ಹೊರಟುಹೋಯಿತು, ಅವೆಲ್ಲಾ ನನಗಂತೂ ಓವರ್ಹೆಡ್ ಟ್ರಾನ್ಸ್ಮಿಶನ್ ಆಯ್ತು ಅನ್ನೋದು ಬೇರೆ ಹೇಳಬೇಕಿಲ್ಲ! ಸಂಪದದ ಹರಿಪ್ರಸಾದ್ ನಾಡಿಗರು ಹೇಳಿದ್ದು ಇದ್ದಿದ್ರಲ್ಲಿ ಸ್ವಲ್ಪ ಅರ್ಥವಾಯ್ತು. ಸರಳವಾಗಿ, ನೇರವಾಗಿ ಹೇಳಿದ್ರು. ಇನ್ನೊಂದ್ ಸ್ವಲ್ಪ ನಿಧಾನಕ್ಕೆ ಮಾತಾಡಬಹುದಿತ್ತು ಅನ್ನಿಸ್ತು. ಬರೀ ಭಾವಲಹರಿಗಳಲ್ಲದೇ ಬೇರೆ ಬೇರೆ ವಿಷಯಗಳ ಬಗ್ಗೆನೂ ಕನ್ನಡದಲ್ಲಿ ಬ್ಲಾಗಿಸೋ ಅವಶ್ಯಕತೆ, ಸಾಧ್ಯತೆಗಳ ಬಗ್ಗೆ ಕೆಂಡಸಂಪಿಗೆಯ ರಷೀದರು, ದಟ್ಸ್ಕನ್ನಡದ ಶ್ಯಾಮಸುಂದರ್ಅವರು ಹೇಳಿದ್ರು.
ಆದರೆ ಸಂತೋಷಕುಮಾರರಿಗೆ ಕೂಟ ನಿರಾಸೆ ತಂದಿದೆ.
[..] ಎನೋ ಜವಾಬ್ದಾರಿ ಹಾಳು, ಮೂಳು ಅಂತೆಲ್ಲಾ ಇದುವರೆಗೂ ಬ್ಲಾಗುಗಳಲ್ಲಿ ಕೊರೆದಿದ್ದನ್ನೆ ಅಲ್ಲೂ ಕೊರೆಯಲು ಎಲ್ಲರನ್ನೂ ಕರೆಸಬೇಕಿತ್ತಾ? ಕೊನೆಕೊನೆಗೆ ಶ್ಯಾಮಾ ಮಾತಾನಾಡುವಾಗಲಂತೂ ಹೊರಗಡೆ ಸಂಘಟಕರ ಗಲಾಟೆಯಿಂದ ಮೊದಲೇ ಹಿಂದಿದ್ದ ನಮಗೆ ಎನೂ ಕೇಳಿಸದಂತಾಗತೊಡಗಿತ್ತು. ರಶೀದ್ ಆಗಾಗ ಹಿಂದೆ ತಿರುಗಿ ಇವರನ್ನು ನೋಡತೊಡಗಿದರು.ಆದರೂ ಛಲ ಬಿಡದ ಸಂಘಟಕರು ಮದ್ಯೆ ಮದ್ಯೆ ಕೆಲವರನ್ನು ಹೊರ ಎಳೆದೊಯ್ಯುವುದು, ಸ್ವಲ್ಪ ಸಮಯವಾದ ಮೇಲೆ ತಿರುಗಿ ಕಳುಸಿವುದು ನಡೆದೇ ಇತ್ತು.

























No comments
There are no comments for this post so far.
Leave a comment