ನಾವು ಪ್ರತಿಯೊಬ್ಬರೂ ಯಾರೊ ಒಬ್ಬ ವ್ಯಕ್ತಿಯನ್ನು, ಆತ/ಆಕೆ ಸಿನಿಮಾತಾರೆಯೋ, ಸಂಗೀತಗಾರರೋ, ಕ್ರೀಡಾಪಟುವೋ, ರಾಜಕಾರಣಿಯೋ – ಬಹಳ ಅಭಿಮಾನದಿಂದ ಕಾಣುತ್ತಿರುತ್ತೇವೆ. ಅಂತಹ ವ್ಯಕ್ತಿಯನ್ನು ಮುಖತಃ ಭೇಟಿಯಾಗುವ ಸಂದರ್ಭ ಬಂದರೆ!! ಚೆಂಡೆಮದ್ದಳೆ ಬಾರಿಸುವ ಮೈಸೂರ ಬ್ಲಾಗಿಗ ಅರವಿಂದ ನಾವಡ ಮಾಜೀ ರಾಷ್ಟ್ರಪತಿ ಅಬ್ದುಲ್ ಕಲಾಮರನ್ನು ಭೇಟಿಯಾಗಿ ಕೈಕುಲುಕಿದ ವಿಶೇಷ ದಿನದ ಬಗ್ಗೆ ಹೇಳಿಕೊಳ್ಳುತ್ತಾರೆ.
“ಹೇಗಿದ್ದರೂ ಕನಸು ಕಾಣುತ್ತೀರಿ. ಹಾಗಾದ್ರೆ ಛೋಟಾ ಕನಸೇಕೆ ? ದೊಡ್ಡದೇ ಕಾಣಿರಲ್ಲ?’ ಎಂದು ಎಲ್ಲರಲ್ಲೂ ಕನಸು ಕಾಣುವುದನ್ನು ಬಿತ್ತಿದವರು ಅಬ್ದುಲ್ ಕಲಾಂ. ಅದುವರೆಗಿನ ರಾಷ್ಟ್ರಪತಿಗಳಲ್ಲಿ ಬಹುತೇಕರು ಅವಧಿ ಮುಗಿಸಿದರೆ ಸಾಕು ಎಂದುಕೊಂಡು ಭವನವನ್ನು ಹೊಕ್ಕವರು. ಅಂದರೆ ಅಂಥದೊಂದು ಜನರಲ್ಲಿ ಉತ್ಸಾಹ ಬಿತ್ತುವ, ಗುರಿ ನಿಗದಿಪಡಿಸಿ ಬನ್ನಿ, ಸಾಗೋಣ ಎಂದು ಕರೆದೊಯ್ಯುವ ಸಾಹಸವನ್ನು ಮಾಡುವುದಿರಲಿ, ಯೋಚಿಸಿಯೂ ಇರಲಿಲ್ಲ.”









Comments
Comments are closed on this post.